ಉಡುಪಿ:- ಸಂವಿಧಾನದ ಆಶಯದಂತೆ ಸಮಾನತೆ, ಪ್ರಜಾಪ್ರಭುತ್ವ ಇವರೆಡು ಆಶಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ಹೆಚ್ಚಿನ ಪ್ರಯತ್ನ ಮಾಡಲು ನಮ್ಮನ್ನು ನಾವು ಸಮರ್ಪಣೆ ಮಾಡುವ ಪ್ರೇರಣೆಯ ದಿವಸ ಗಣರಾಜ್ಯೋತ್ಸವ ದಿನಾಚರಣೆ ಆಗಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಅವರು ಇಂದು ಉಡುಪಿ ನಗರದ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವದ ಸಂದೇಶ ನೀಡುತ್ತಾ ಮಾತನಾಡಿದರು.
ಪ್ರಜಾಫ್ರಭುತ್ವ ಸಾಕಷ್ಟು ಆಳವಾಗಿ ಬೇರೂರಿದ್ದರೂ ಆರ್ಥಿಕ ಪ್ರಗತಿಯನ್ನು ಸಾಧಿಸಿದ್ದು, ಇನ್ನೂ ಸಂಪೂರ್ಣ ಸಮಾನತೆ ನನಸಾಗಿಲ್ಲ. ದೇಶದಲ್ಲಿ ಇಂದು ಪ್ರಜಾಪ್ರಭುತ್ವ ಇದ್ದದೂ ಕೂಡ ಆರ್ಥಿಕ ಅಸಮಾನತೆ ಬೆಳೆಯುತ್ತಿದೆ. ದೇಶದಲ್ಲಿ ಕೆಲವು ಶ್ರೀಮಂತರಾಗುತ್ತಿದ್ದಾರೆ. ದೇಶದ ಬಡಜನರ ದುಡಿಮೆ ಕೆಲವೇ ಕೆಲವು ಶ್ರೀಮಂತರ ಕೈಗೆ ಸೇರುತ್ತಿದೆ. ದೇಶದ ಆಸ್ತಿಯ ಆದಾಯ ಶ್ರೀಮಂತರ ಪಾಲಾದರೆ ದುಡಿಯುವ ರ್ವ್ಗ ಬರೀ ದುಡಿಮೆಯಾದರೆ ನಮ್ಮ ಸಂವಿಧಾನದ ಆಶಯವೂ ಈಡೇರುವುದಿಲ್ಲ. ಅದು ಸಮಾನ ದೇಶವೂ ಆಗುವುದಿಲ್ಲ. ನಾಳೆಯ ದಿನಗಳಲ್ಲಿ ಇದು ಪ್ರಜಾಪ್ರಭುತ್ವಕ್ಕೂ ತೊಂದರೆಯಾಗುತ್ತದೆ. ಯಾಕೆಂದರೆ ಇದು ಶೋಷಣೆಯಾಗುತ್ತದೆ. ಶೋಷಣೆಯ ವಿರುದ್ಧ ಒಂದುಲ್ಲಾ ಒಂದು ದಿನ ಧ್ವನಿ ಕೈ ಎತ್ತಿದಾಗ ದೇಶದಲ್ಲಿ ತೊಂದರೆಗಳೂ ಸಹ ಉದ್ಭವವಾಗುತ್ತದೆ. ಇಂದು ದೇಶದಲ್ಲಿ ಬೆಳೆಯುತ್ತಿರುವ ಆರ್ಥಿಕ ಅಸಮಾನತೆ ಅದರ ವಿರುದ್ಧ ನಾವೆಲ್ಲರೂ ಪ್ರಯತ್ನ ಮಾಡಬೇಕಿದೆ. ದೇಶದ ಆಸ್ತಿ ಆದಾಯ ಎಲ್ಲರಿಗೂ ಪಾಲು ಸಿಗಬೇಕು. ದಿಕ್ಕಿನಲ್ಲಿ ಹೆಚ್ಚಿನ ಪ್ರಯತ್ನ ಮಾಡೋಣ ಎಂದರು.
ರಾಜ್ಯದಲ್ಲಿ ಆರ್ಥಿಕ ಸಮಾನತೆ ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಿಂದ ಪಂಚ ಗ್ಯಾರಂಟಿಗಳನ್ನು ಜಾರಿಗೆ ತರಲಾಯಿತು. ಗೃಹಲಕ್ಷಿö್ಮÃ ಯೋಜನೆಯಡಿ ರಾಜ್ಯದ ಬಡ ಹೆಣ್ಣುಮಕ್ಕಳಿಗೆ ಆರ್ಥಿಕವಾಗಿ ಪ್ರತೀ ತಿಂಗಳು 2000 ರೂ. ಗಳ ನೆರವನ್ನು 1.22 ಕೋಟಿ ಗೂ ಹೆಚ್ಚು ಜನರಿಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಹೆಣ್ಣೂ ಮಕ್ಕಳು ಉಚಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಿಂದವೂ ಸಹ ಆರ್ಥಿಕ ಹೊರೆ ಕಡಿಮೆಯಾಗಿದೆ. ರಾಜ್ಯದಲ್ಲಿ ಈವರೆಗೂ 365.42 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆಯ ಸೌಲಭ್ಯವನ್ನು ಪಡೆದಿದ್ದಾರೆ ಎಂದರು.
ಮನೆಯ ಖರ್ಚನ್ನು ಕಡಿಮೆ ಮಾಡಲು ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ರಾಜ್ಯದಲ್ಲಿ ಸುಮಾರು 1.63 ಕೋಟಿಗೂ ಅಧಿಕ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯವನ್ನು ನೀಡಲಾಗಿದೆ. ಬಡವರಿಗೆ 5 ಕೆ.ಜಿ ಅಕ್ಕಿಯ ಜೊತೆಗೆ ಮನೆಗೆ ಅಗತ್ಯವಿರುವ ಇತರೆ ಧವಸಧಾನ್ಯಗಳನ್ನು ಕೊಳ್ಳಲು ಅನುಕೂಲವಾಗುವಂತೆ ಅನ್ನಭಾಗ್ಯ ಯೋಜನೆಯಡಿ ಸುಮಾರು 1.19 ಕೋಟಿ ಪಡಿತರ ಚೀಟಿದಾರರ 4.30 ಕೋಟಿ ಜನರಿಗೆ ಪ್ರತೀ ತಿಂಗಳು ಕೂಡ ಖಾತೆಗೆ ತಲಾ 170 ರೂ. ನಂತೆ ಜಮಾ ಮಾಡಲಾಗುತ್ತಿದೆ.
ನಿರುದ್ಯೋಗಿ ಪದವಿ ಪಡೆದ ಯುವಜನರಿಗೂ ಸಹ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ರಾಜ್ಯದಲ್ಲಿ 1.65 ಲಕ್ಷ ಅಭ್ಯರ್ಥಿಗಳಿಗೆ ಈವರೆಗೆ 252 ಕೋಟಿ ರೂ. ಹಣವನ್ನು ಡಿ.ಬಿ.ಟಿ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದರು.
ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಶೇ.30 ರಷ್ಟು ಅನೇಕ ದಾಖಲೆಗಳು ಇಲ್ಲದೇ ಇರುವುದಾಗಿ ಕೇಳಿ ಬಂದಿದೆ. ಇರುವ ದಾಖಲೆಗಳನ್ನು ಎಲ್ಲಾ ತಹಶೀಲ್ದಾರ್ಗಳ ಕಚೇರಿಯಲ್ಲಿ ಡಿಜಿಟಲೀಕರಣ ಅಂದರೆ ಸ್ಕಾö್ಯನಿಂಗ್ ಮಾಡುವಂತಹ ಭೂ ಸುರಕ್ಷಾ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡಲಾಗಿದೆ ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಕ್ತಿಯನ್ನು ತುಂಬಿದಾಗ ಮಾತ್ರ ಸಂವಿಧಾನದ ಆಶಯ ಈಡೇರುತ್ತದೆ. ನಮ್ಮ ಸರ್ಕಾರ ಇದನ್ನು ಈಡೇರಿಸುವ ಕೆಲಸ ಮಾಡುತ್ತಿದೆ. ಇವತ್ತಿಗೂ ಅನೇಕ ಸಮಸ್ಯೆಗಳು ನಮ್ಮ ಸಮಾಜವನ್ನು ಕಾಡುತ್ತಿವೆ. ಆರ್ಥಿಕ ಅಸಮಾನತೆ, ಪ್ರಾದೇಶಿಕ ಅಸಮಾನತೆ, ಸಮಾಜದಲ್ಲಿ ಸಂಘರ್ಷಗಳು, ಬಡತನ ಜನರನ್ನು ಇಂದಿಗೂ ಸಹ ಕಾಡುತ್ತಿದೆ. ಇಂತಹ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಉಡುಪಿ ಜಿಲ್ಲೆಯು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಹೆಸರುವಾಸಿಯಾಗಿದೆ. ಕಲೆ, ಸಂಸ್ಕೃತಿ ವಿಷಯಕ್ಕೆ ಬಂದಲ್ಲಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದೆ ಎಂದರು.
ಈ ಹಿಂದೆ ಪ್ರಜೇಗಳೇ ಪ್ರಭುಗಳಾಗದೇ ರಾಜಮನೆತನಗಳ ಆಳ್ವಿಕೆಯಲ್ಲಿ ಆಳುಗಳಾಗಿ ಬೆಳೆಯುತ್ತಿದ್ದರು. ದೇಶದಲ್ಲಿ ಪ್ರಜೆಗಳಿಗೆ ಹಕ್ಕುಗಳೇ ಇರಲಿಲ್ಲ. ಸಮಾನತೆ ಇಲ್ಲದೇ, ಮೇಲು ಜಾತಿ, ಕೆಳ ಜಾತಿ ಕೀಳು ಮನೋಭಾವದಿಂದ ಕೂಡಿದ ಇತಿಹಾಸ ಇತ್ತು. ನಮ್ಮನ್ನು ಆಳಿದ ಹೊರರಾಜ್ಯದ ರಾಜರು ಹಾಗೂ ಬ್ರಿಟಿಷರು ಎಲ್ಲೂ ಸಹ ಸಮಾನತೆಯನ್ನು ಕೊಡಲಿಲ್ಲ. ಆದರೆ ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಸಮಾನರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟçಪತಿಯಿಂದ ಹಿಡಿದು ಸಫಾಯಿ ಕರ್ಮಚಾರಿಯವರೆಗೂ ಎಲ್ಲರೂ ಲಿಂಗ, ಜಾತಿ, ಧರ್ಮ, ಜನಾಂಗ, ಭಾಷೆ ಬೇಧಭಾವವಿಲ್ಲದೇ ಸಮಾನರಾಗಿದ್ದೇವೆ. ಅದು ನಮ್ಮ ಸಂವಿಧಾನದಿAದ ಎಂದರು.
ನಾವು ಸ್ವಾತಂತ್ರö್ಯವನ್ನು ಪಡೆದು ಸಂವಿಧಾನ ರಚಿಸಿಕೊಂಡಾಗ ದೇಶದ ಒಳಗೆ ಹಾಗೂ ಹೊರಗೆ ಕೆಲವರು ಸೇರಿದಂತೆ ಬ್ರಿಟೀಷರು ನಮ್ಮನ್ನು ನಾವು ಆಳುವ ಶಕ್ತಿ ಇಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಅಸಕ್ತರು ಎಂದು ಭವಿಷ್ಯ ನುಡಿದಿದ್ದರು. ಆದರೆ ಅದನ್ನು ಎಲ್ಲರ ಭವಿಷ್ಯ ನುಡಿಗಳನ್ನು ಹುಸಿಯಾಗಿಸಿ, ಭಾರತ 76 ವರ್ಷಗಳ ಕಾಲ ಪ್ರಜಾಪ್ರಭುತ್ವವಾಗಿ ಸಮಾನತೆಯ ಸಂದೇಶವನ್ನು ಗುರಿಯಾಗಿರಿಸಿಕೊಂಡು ಪ್ರಪಂಚದ ದೇಶಗಳೆದುರು ದಾಪುಗಾಲು ಹಾಕುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಯಶ್ಪಾಲ್ ಎ ಸುವರ್ಣ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ವಿಧಾನಪರಿಷತ್ ಶಾಸಕ ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ, ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಮಿಥುನ್ ಹೆಚ್.ಎನ್, ಕಾರ್ಕಳ ವೈಲ್ಡ್ಲೈಫ್ ಡಿ.ಎಫ್.ಓ ಶಿವರಾಮ ಎಂ ಬಾಬು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ