Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಸ್ಕಾರ್ಫಿಯೋ ಕಾರು ಪಲ್ಟಿ

Udupifirst-udupinews-


ಉಡುಪಿ : ಕೊಲ್ಲೂರು ಯಾತ್ರೆಯನ್ನು ಮುಗಿಸಿಕೊಂಡು ಕೇರಳಕ್ಕೆ ತೆರಳುತ್ತಿದ್ದ ಸ್ಕಾರ್ಫಿಯೋ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಪಾವಂಜೆ ಮುಖ್ಯ ಜಂಕ್ಷನ್ ಬಳಿ ನಡೆದಿದೆ.

ಪಾವಂಜೆ ಜಂಕ್ಷನ್ ಬಳಿ ಬಂದಾಗ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಹತ್ತಿರದಲ್ಲಿದ್ದ ಎಳನೀರು ಮಾರಾಟದ ಅಂಗಡಿಯತ್ತ ನುಗ್ಗಿದ್ದು ಅಲ್ಲಿ ನಿಲ್ಲಿಸಿದ್ದ ಬೈಕೊಂದಕ್ಕೆ ಢಿಕ್ಕಿ ಹೊಡೆದಿದೆ. ರಾಜು ಅವರ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಎಳನೀರು, ಸೋಡಾ ಬಾಟ್ಲಿ, ಅಂಗಡಿಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದೆ.

ಬೈಕ್‌ ಸವಾರ ಪಕ್ಷಿಕೆರೆಯ ಸರ್ಫಾಜ್ ಬೈಕ್ ನಿಲ್ಲಿಸಿ, ಎಳನೀರು ಕುಡಿಯಲೆಂದು ತೆರಳಿದ್ದರು. ಕೇರಳ ಮೂಲದ ಕಾರಿನಲ್ಲಿ ಮೂವರು ಮಹಿಳೆಯರು, ಮಗು ಹಾಗೂ ಮೂವರು ಪುರುಷರಿದ್ದು ಓರ್ವ ಮಹಿಳೆಗೆ ತಲೆಗೆ ಗಂಭೀರ ಗಾಯವಾಗಿದೆ. ಉಳಿದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo