ಕುಂದಾಪುರ : ಕ್ಲಿನ್ ಕುಂದಾಪುರ ಪ್ರಾಜೆಕ್ಟ್ ಹಾಗೂ ಎಫ್ . ಎಸ್ . ಎಲ್ ಇಂಡಿಯಾ ಸಹಾಭಾಗಿತ್ವದಲ್ಲಿ ವಿವಿಧ ಇಲಾಖೆ , ಹಾಗೂ ಇನ್ನಿತರ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾದ ಐತಿಹಾಸಿಕ ಆಮೆ ಹಬ್ಬವನ್ನು ಕುಂದಾಪುರ ಕೋಡಿಯಲ್ಲಿ ಏಪ್ರಿಲ್ 30 ರಂದು ಹಮ್ಮಿಕೊಳ್ಳಲಾಗಿದೆ .
ಈ ಕಾರ್ಯಕ್ರಮದಲ್ಲಿ ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಏಪ್ರಿಲ್ 30 ರಂದು ಬೆಳ್ಳಿಗೆ 7 ಗಂಟೆ ಸುಮಾರಿಗೆ ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ .
ಈ ಸಂದರ್ಭದಲ್ಲಿ ಶಾಸಕರು , ಸಂಸದರು , ಸಚಿವರು , ಜನಪ್ರತಿನಿಧಿಗಳು , ಜಿಲ್ಲಾಧಿಕಾರಿ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ . ಈ ಕಾರ್ಯಕ್ರಮದಲ್ಲಿ ಕಡಲಾಮೆ ಕುರಿತಾದ ಮಾಹಿತಿ , ಚಿತ್ರಕಲಾ ಸ್ಪರ್ಧೆ , ಗಾಳಿಪಟ ಹಬ್ಬ ಮುಂತಾದ ಕಾರ್ಯಕ್ರಮಗಳು ನೆರವೇರಲಿದೆ ಎಂದು ಕ್ಲಿನ್ ಕುಂದಾಪುರ ಪ್ರಾಜೆಕ್ಟ್ ಸಂಚಾಲಕ ಭರತ್ ಬಂಗೇರ ತಿಳಿಸಿದ್ದಾರೆ
.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ