Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ:-ರೈಲುಗಳ ಸಂಚಾರದಲ್ಲಿ ವ್ಯತ್ಯಯ


ಉಡುಪಿ:- ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ವರ್ಣಾ-ಕರ್ಮಾಲಿ ವಿಭಾಗ ನಡುವಿನ ಝುವಾರಿ ಸೇತುವೆ ಹಾಗೂ ಕಾರವಾರ ವಲಯದ ಕರ್ಮಾಲಿ-ತೀವಿಂ ವಿಭಾಗ ನಡುವಿನ ಮಾಂಡೋವಿ ಸೇತುವೆಯ ರಿಪೇರಿ ಕಾರ್ಯ ಪ್ರಗತಿಯಲ್ಲಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಕೊಂಕಣ ರೈಲ್ವೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ನ.10ರಂದು ಸಂಚಾರ ಪ್ರಾರಂಭಿಸುವ ರೈಲು ಸಂಖ್ಯೆ.04695 ಕೊಚ್ಚುವೇಲಿ- ಅಮೃತಸರ ವಿಶೇಷ ರೈಲಿನ ಪ್ರಯಾಣ ಉಡುಪಿ ಮತ್ತು ಮಡಗಾಂವ್ ಜಂಕ್ಷನ್ ನಡುವೆ 180 ನಿಮಿಷಗಳ ಕಾಲ ತಡೆಹಿಡಿಯಲಾಗುತ್ತದೆ. ರೈಲು ನಂ.02617 ಎರ್ನಾಕುಲಂ ಜಂಕ್ಷನ್-ಎಚ್.ನಿಝಾಮುದ್ದೀನ್ ವಿಶೇಷ ರೈಲಿನ ಪ್ರಯಾಣ ಕಾರವಾರ ಹಾಗೂ ವರ್ನಾ ವಿಭಾಗದ ನಡುವೆ 60 ನಿಮಿಷ ತಡೆಹಿಡಿಯಲಾಗುತ್ತದೆ.

ನ.11ರಂದು ಪ್ರಯಾಣ ಪ್ರಾರಂಭಿಸುವ ರೈಲು ನಂ.06164 ತಿರುನಲ್ವೇಲಿ- ದಾದರ್ ವಿಶೇಷ ರೈಲಿನ ಪ್ರಯಾಣವನ್ನು ಉಡುಪಿ ಮತ್ತು ಮಡಗಾಂವ್ ಜಂಕ್ಷನ್ ನಡುವೆ 180 ನಿಮಿಷ ನಿಯಂತ್ರಿಸಲ್ಪಡಲಿದೆ. ಎಂದು ಕೊಂಕಣ ರೈಲ್ವೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವರದಿ:-ಉಡುಪಿ ಫಸ್ಟ್


0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo