Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ ಜಿಲ್ಲೆಗೆ ನೈಟ್ ಕರ್ಫ್ಯೂ ವಿಧಿಸಿದಕ್ಕೆ ಶಾಸಕ ರಘುಪತಿ ಭಟ್ ಆಕ್ಷೇಪ

ಉಡುಪಿ: ಉಡುಪಿ ಜಿಲ್ಲೆಗೂ ವೀಕೆಂಡ್ ಕರ್ಪ್ಯೂ ವಿಸ್ತರಣೆ ಮಾಡಿದ್ದಕ್ಕೆ ಶಾಸಕ ರಘುಪತಿ‌ ಭಟ್ ಆಕ್ಷೇಪ ಎತ್ತಿದ್ದಾರೆ. ಉಡುಪಿ ಗಡಿ‌ ಜಿಲ್ಲೆಗಳ ಸಾಲಿಗೆ ಸೇರುವುದಿಲ್ಲ ಎಂದ ಅವರು, ಉಡುಪಿ ಜಿಲ್ಲೆಯನ್ನು ವೀಕೆಂಡ್ ಕರ್ಫ್ಯೂ ನಿಂದ‌ ಹೊರಗಿಡಬೇಕು. ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಿದೆ.

ಪಾಸಿಟಿವಿಟಿ ರೇಟ್ ಈಗ 1.5 ಕ್ಕೆ ಇಳಿಕೆಯಾಗಿದೆ. ಜಿಲ್ಲೆಯ ಜನರು ಕಟ್ಟುನಿಟ್ಟಾಗಿ ಕೋವಿಡ್ ನಿಯಮ ಪಾಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ದಿನಕ್ಕೆ ಹತ್ತು ಸಾವಿರದಷ್ಟು ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ಕರ್ಫ್ಯೂ ವಿಧಿಸಿದರೆ ವ್ಯಾಪಾರಸ್ಥರಿಗೆ ಮತ್ತೊಮ್ಮೆ ಸಮಸ್ಯೆಯಾಗುತ್ತದೆ
ಈ ಬಗ್ಗೆ ನಾನು ಸರ್ಕಾರಕ್ಕೆ ಆಗ್ರಹಿಸುತ್ತೇನೆ.ಸಚಿವ ಸುನಿಲ್ ಕುಮಾರ್ ಅವರ ಜೊತೆಯೂ ಚರ್ಚಿಸಿದ್ದೇನೆ. ಸಚಿವ ಸುನಿಲ್ ಕೂಡ ನನ್ನ ನಿಲುವು ಒಪ್ಪಿದ್ದಾರೆ.ಆರೋಗ್ಯ ‌ಸಚಿವರೊಂದಿಗೆ ಮಾತನಾಡುವುದಾಗಿ‌ ಹೇಳಿದ್ದಾರೆ.

ವರದಿ: Team Inspiring You
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo